ಹೊನ್ನಾವರ: ಅಂಗಾರಕ ಸಂಕಷ್ಠಿ ಪ್ರಯುಕ್ತ ಪುರಾಣ ಪ್ರಸಿದ್ಧ ಖರ್ವಾದ ಶ್ರೀ ಸಿದ್ಧಿವಿನಾಯಕ ಸನ್ನಿಧಿಯಲ್ಲಿ ಮಂಗಳವಾರ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಅಂಗಾರಕ ಸಂಕಷ್ಠಿಯ ಹಿನ್ನಲೆ ಕುಂಕುಮಾರ್ಚನೆ, ದುರ್ವಾರ್ಚನೆ, ಗಣಹವನ, ಪಂಚಖಾದ್ಯ, ಕಡಲೆ ನೈವೇದ್ಯ ಸೇರಿದಂತೆ ಇತ್ಯಾದಿ ಸೇವೆ ನಡೆಯಿತು.ತಾಲೂಕಿನ ವಿವಿಧೆಡೆಯಿಂದ ಭಕ್ತವೃಂದ ಆಗಮಿಸಿ ಕಡಲೆ,ಹಣ್ಣು,ಕಾಯಿ ಸಮರ್ಪಿಸಿ, ವಿವಿಧ ಸೇವೆ ಸಲ್ಲಿಸಿ, ಶ್ರೀ ದೇವರದರ್ಶನ ಪಡೆದು ಇಷ್ಟಾರ್ಥ ಸಿದ್ಧಿಗಾಗಿ ಶ್ರೀ ಸಿದ್ಧಿವಿನಾಯಕನಲ್ಲಿ ಬೇಡಿಕೊಂಡರು. ಮಹಾಮಂಗಳಾರತಿ ನಂತರ ಪ್ರಸಾದ ವಿತರಣೆ ನಡೆಯಿತು. ಭಕ್ತರಿಗೆ ಉಟೋಪಹಾರ ವ್ಯವಸ್ಥೆ ಮಾಡಲಾಗಿತ್ತು.